ಕಾವ್ಯ ಲಹರಿ//ರಘುನಂದನ ಕೆ.
ಕತ್ತಲಿರುಳ ಮೌನದಲ್ಲಿ
ಬುದ್ಧನರಿವಿನ ಯುದ್ಧದಲ್ಲಿ
ತಮವು ತೊರೆಯಿತು
ಅರಿವು ಕರೆಯಿತು
ಗೆಲುವಲ್ಲಿ ಸೋಲಲ್ಲಿ
ಬೆಳಗಲ್ಲಿ ಇರುಳಲ್ಲಿ
ಸಿದ್ಧ ನಡೆವ ದಾರಿಯಲ್ಲಿ
ಕಾಲ ಸರಿಯಿತು
ಬದುಕು ಸವೆಯಿತು
ಮನಸಲ್ಲಿ ಕನಸಲ್ಲಿ
ನನಸುಗಳ ಹಾದಿಯಲ್ಲಿ
ಗೆದ್ದವರು ತುಳಿದ ಬೀದಿಯಲ್ಲಿ
ಮತಿಯು ಕಳೆಯಿತು
ಪಥವು ಬೆಳೆಯಿತು
ನಿನ್ನೆಯಲ್ಲಿ ಇಂದಿನಲ್ಲಿ
ನಾವಿರದ ನಾಳೆಯಲ್ಲಿ
ಸಾವಿರದ ಕಾಲದಲ್ಲಿ
ತೆರೆಯು ಸರಿಯಿತು
ತಾರೆ ಬೆಳಗಿತು
ಭಕ್ತಿಯಲ್ಲಿ ಶಕ್ತಿಯಲ್ಲಿ
ಜ್ಞಾನದೀಪ ಜ್ಯೋತಿಯಲ್ಲಿ
ಅಂತರಾತ್ಮ ಮೌನದಲ್ಲಿ
ಅರಿವು ಹಾಡಿತು
ಬೆಳಕು ಮೂಡಿತು
ತಮವು ತೊರೆಯಿತು
ಅರಿವು ಕರೆಯಿತು
ಗೆಲುವಲ್ಲಿ ಸೋಲಲ್ಲಿ
ಬೆಳಗಲ್ಲಿ ಇರುಳಲ್ಲಿ
ಸಿದ್ಧ ನಡೆವ ದಾರಿಯಲ್ಲಿ
ಕಾಲ ಸರಿಯಿತು
ಬದುಕು ಸವೆಯಿತು
ಮನಸಲ್ಲಿ ಕನಸಲ್ಲಿ
ನನಸುಗಳ ಹಾದಿಯಲ್ಲಿ
ಗೆದ್ದವರು ತುಳಿದ ಬೀದಿಯಲ್ಲಿ
ಮತಿಯು ಕಳೆಯಿತು
ಪಥವು ಬೆಳೆಯಿತು
ನಿನ್ನೆಯಲ್ಲಿ ಇಂದಿನಲ್ಲಿ
ನಾವಿರದ ನಾಳೆಯಲ್ಲಿ
ಸಾವಿರದ ಕಾಲದಲ್ಲಿ
ತೆರೆಯು ಸರಿಯಿತು
ತಾರೆ ಬೆಳಗಿತು
ಭಕ್ತಿಯಲ್ಲಿ ಶಕ್ತಿಯಲ್ಲಿ
ಜ್ಞಾನದೀಪ ಜ್ಯೋತಿಯಲ್ಲಿ
ಅಂತರಾತ್ಮ ಮೌನದಲ್ಲಿ
ಅರಿವು ಹಾಡಿತು
ಬೆಳಕು ಮೂಡಿತು
ಚಿತ್ರಕೃಪೆ : ಅಂತರ್ಜಾಲ
ತುಂಬಾ ಒಳ್ಳೆಯ ಅರಿವು....
ReplyDeleteಯಾರ್ಯಾರಿಗೆ ಎಲ್ಲೆಲ್ಲಿ ಜ್ಞಾನೋದಯವೋ....